28-2-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.
ಪಟ್ಟಣ ಪಂಚಾಯತಿ ಮಾಸಿಕ ಸರ್ವ ಸಾಮಾನ್ಯ ಸಭೆಯು ಸೋಮವಾರ ಪ.ಪಂ.ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್.ಎಫ್.ಸಿ. ಕುಡಿಯುವ ನೀರಿನ ಯೋಜನೆಯಲ್ಲಿ ಬಾಕಿ ಉಳಿದ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪಟ್ಟಣ ಪಂಚಾಯತಿ ನೀರಿನ ಟ್ಯಾಂಕರ್ ಗಳನ್ನು ದುರಸ್ತಿಗೊಳಿಸುವ ಬಗ್ಗೆ ಹಾಗೂ 15ನೇ ಹಣಕಾಸು ಯೋಜನೆ ಮತ್ತು ಅಮೃತ ನಿರ್ಮಲನಗರ ಯೋಜನೆಯ ಅಡಿಯಲ್ಲಿ ಕಾಮಗಾರಿಗಳಿಗೆ ಕರೆಯಲಾದ ಟೆಂಡರ್ ಅನುಮೋದನೆ ನೀಡುವ ಕುರಿತು ಚರ್ಚೆನಡೆಸಲಾಯಿತು.

ತಟ್ಟಿಹಳ್ಳದಿಂದ ಪಟ್ಟಣಕ್ಕೆ ಕುಡಿಯುವ ನೀರು ಕಾಮಗಾರಿಗೆ ಅಂದಾಜು ಪತ್ರಿಕೆಗೆ ಅನುಮೋದನೆ ನೀಡಲಾಯಿತು. ಪಟ್ಟಣದ ವಿವಿದೆಡೆ ಅಳವಡಿಸಲಾದ ಬೀದಿ ದೀಪಗಳ ವಿಷಯದ ಕುರಿತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ADVT

ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಆದಿತ್ಯ ಗುಡಿಗಾರ್ ಆಯ್ಕೆ.

ಸಭೆಯಲ್ಲಿ ಪಟ್ಟಣ ಪಂಚಾಯತಿ ನೂತನ ಸ್ಥಾಯಿ ಸಮೀತಿಯನ್ನು ರಚಿಸಲಾಯಿತು. ಸ್ಥಾಯಿ ಸಮೀತಿಯ ನೂತನ ಅಧ್ಯಕ್ಷರಾಗಿ ಆದಿತ್ಯ ಗುಡಿಗಾರ್ ಆಯ್ಕೆಯಾದರು. ಗ್ರಾಮದೇವಿನಗರದ ಸದಸ್ಯರಾದ ಇವರು ಕ್ರಿಯಾಶೀಲ ಸದಸ್ಯರೆಂದೇ ಗುರುತಿಸಿಕೊಂಡಿದ್ದಾರೆ. ತಮ್ಮ ವಾರ್ಡಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಇವರು, ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಹಿಂದೂಪರ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಲ್ಲಾಪುರ ಪಟ್ಟಣದ ಪ್ರಸಿದ್ಧ ಬಿಕ್ಕು ಗುಡಿಗಾರ ಕುಟುಂಬದವರಾದ ಇವರು ಕಾಷ್ಠ ಶಿಲ್ಪ ರಚನೆ ಹಾಗೂ ಅಪರೂಪದ ಕಲಾ ನೈಪುಣ್ಯತೆ ಹೊಂದಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ

FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading