19-3-2022. ಶನಿವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ತಾಲೂಕಿನ ಹುಲೇಕೋಣೆಯಲ್ಲಿ ಶುಕ್ರವಾರ ರಾತ್ರಿ ಮಾರುತಿ ಪ್ರತಾಪ ಯಕ್ಷಗಾನ ಬಯಲಾಟ ನಡೆಯಿತು. ಹುಲೇಕೋಣೆಯ ವೆಂಕಟ್ರಮಣ ಭಟ್ಟ ಹಾಗೂ ಗ್ರಾಮಸ್ಥರು ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದರು. ಯಕ್ಷಗಾನ ಪ್ರದರ್ಶನಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಗಣ್ಯರು ಉಧ್ಘಾಟಿಸಿದರು.

advt

ಸಭೆಯಲ್ಲಿ ಹಿರಿಯರಾದ ಗಣಪತಿ ಭಟ್ಟ ಗೇರಗದ್ದೆ, ಎಲ್.ಎಸ್.ಎಂ.ಪಿ.ಸೊಸೈಟಿಯ ಅಧ್ಯಕ್ಷ ನಾಗರಾಜ ಕವಡಿಕೆರೆ,ಪ್ರಮುಖರಾದ ಎಲ್.ಪಿ. ಭಟ್ಟ ಗುಂಡ್ಕಲ್, ನರಸಿಂಹ ಭಟ್ಟ ಗುಂಡ್ಕಲ್, ಶಿವರಾಮ ಭಟ್ಟ ಬೆಳಖಂಡ, ಶ್ರೀಧರ ಭಟ್ಟ, ಗೋಪಾಲಕೃಷ್ಣ ಭಟ್ಟ ಹುಲೇಕೋಣೆ, ಸುಬ್ರಾಯ ಭಟ್ಟ, ವೆಂಕಟ್ರಮಣ ಭಟ್ಟ ಚಂದಗುಳಿ ಮುಂತಾದವರು ಇದ್ದರು.

advt

ಸಂಘಟಕ ವೆಂಕಟ್ರಮಣ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ನಂತರ ನಡೆಯ ಮಾರುತಿ ಪ್ರತಾಪ ಯಕ್ಷಗಾನ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರಾಚಾರ್ಯ ಜನ್ಸಾಲೆ, ಮೃದಂಗವಾದಕರಾಗಿ ಗಣಪತಿ ಭಾಗ್ವತ್ ಕವಾಳೆ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ್ ಭಾಗವಹಿಸಿದ್ದರು.

advt

ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಗಣಪತಿ ಹೆಗಡೆ ತೋಟಿಮನೆ, ಭಾಸ್ಕರ ಗಾಂವ್ಕಾರ್ ಬಿದ್ರೇಮನೆ, ಅಶೋಕ ಭಟ್ಟ ಸಿದ್ದಾಪುರ, ಸದಾಶಿವ ಮಲವಳ್ಳಿ, ಚಂದ್ರಹಾಸ ಗೌಡ ಹೊಸಪಟ್ಟಣ, ಶ್ರೀಧರ ಭಟ್ಟ ಕಾಸರಕೋಡ, ಶ್ರೀಧರ ಅಣಲಗಾರ, ದೀಪಕ್ ಕುಂಕಿ ಮುಂತಾದವರು ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading