21-3-2022. ಸೋಮವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ತಾಲೂಕಿನ ಉಮ್ಮಚಗಿಯ ವಿ.ಎಸ್. ಎಸ್. ಸಭಾಂಗಣದಲ್ಲಿ ರಂಗ ಸಮೂಹ ಮಂಚಿಕೇರಿಯವರಿಂದ ಕಾಲಚಕ್ರ ನಾಟಕ ಪ್ರದರ್ಶನ ನಡೆಯಿತು.

ADVT

ನಾಟಕ ಪ್ರದರ್ಶನವನ್ನು ಹಿರಿಯ ಸಿನಿಮಾ ನಟ ನಿರ್ನಳ್ಳಿ ರಾಮಕೃಷ್ಣ ಉಧ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಲ್ಲಿಯ ಜನ ಬಹಳ ತಿಳಿದವರು. ಕಲೆ ಸಾಹಿತ್ಯ ಎಲ್ಲದರಲ್ಲೂ ಪಳಗಿದವರು.

ADVT

ನಾನೂ ಮೂರು ವರ್ಷ ಗುಡಿಗೇರಿ ನಾಟಕ ಕಂಪನಿಯಲ್ಲಿ ಬಣ್ಣ ಹಚ್ಚಿದ್ದೆ. ನಂತರ ಸಿನಿಮಾ ಕ್ಷೇತ್ರಕ್ಕೆ ಬಂದೆ. ಈಗ ಅದೆಲ್ಲ ನೆನಪು ಎಂದರು. ಮಂಚಿಕೇರಿ ರಂಗಸಮೂಹದ ಪ್ರಮುಖರಾದ ಆರ್.ಎನ್. ದುಂಡಿ ಮಾತನಾಡಿ, ಸೇವಾ ಸಹಕಾರಿ ಸಂಘವೊಂದು ನಮ್ಮ ನಾಟಕದ ಪ್ರದರ್ಶನಕ್ಕೆ ನಮಗೆ ಸಹಕರಿಸುತ್ತಿರುವುದು ಇದೇ ಮೊದಲು.

ADVT

ಅದಕ್ಕಾಗಿ ಉಮ್ಮಚ್ಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ದಣಿವರಿಯದೆ ಭಾಗಿಯಾದ ಇಲ್ಲಿನ ನಗುಮೊಗದ ಸಿಬ್ಬಂದಿ ವರ್ಗವನ್ನು ಅಭಿನಂದಿಸುತ್ತೇನೆ ಎಂದರು. ನಟ ನೀರ್ನಳ್ಳಿ ರಾಮಕೃಷ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಸ್ವಾಗತಿಸಿದರು. ಕಲಾವಿದ ಎಂ.ಕೆ.ಭಟ್ಟ ಯಡಳ್ಳಿ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಕನೇನಳ್ಳಿ ವಂದಿಸಿದರು. ನಂತರ ತುಂಬಿದ ಸಭಾಂಗಣದಲ್ಲಿ ಕಾಲಚಕ್ರ ನಾಟಕ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading