3-4-2022. ರವಿವಾರ.

E-YELLAPUR.COM NEWS

ತಾಲೂಕಿನ ಹೆಗ್ಗಾರಿನಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮವು ಸಂಭ್ರಮ ಹಾಗೂ ಶ್ರದ್ಧಾ-ಭಕ್ತಿಯಿಂದನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಕಾಲಮಾನದ ಕುರಿತುಡಾ.ನರಸಿಂಹ ಭಟ್ಟ ಕವಡಿಕೇರಿ ಅವರು ಉಪನ್ಯಾಸ ನೀಡಿ,

ಭಾರತೀಯ ಕಾಲಮಾನವೆಂಬುದು ಅತ್ಯಂತ ವಿಶಿಷ್ಠವಾದುದು, ಇದು ಜಗತ್ತಿನಲ್ಲಿಯೇ ಶ್ರೇಷ್ಠವಾದುದು. ಪಂಚ ಅಂಗಗಳಿಂದ ಕೂಡಿದ ಭಾರತೀಯ ಕಾಲಮಾನಗಣನೆಯು ಗ್ರಹಗಳ ಚಲನೆಯನ್ನು ಆಧರಿಸಿ ಇರುವ ಕಾರಣ ನೈಸರ್ಗಿಕವಾದುದಾಗಿದೆ,

ಕೃತಕವಾದ ಯಾವುದೇ ಅಂಶಗಳೂ ಇದರಲ್ಲಿ ಇಲ್ಲ. ಭಾರತವೆಂಬುದು ಬಹು ದೇವೋಪಾಸನೆಯ ದೇಶ, ಎಲ್ಲರಿಗೂ ಸಹ ತಮಗಿಷ್ಟವಾದ ದೇವರನ್ನು ಆರಾಧಿಸುವ ಅವಕಾಶ ಇದೆ,

ಅದೇ ಕಾರಣದಿಂದ ಭಾರತದಲ್ಲಿ ವೈವಿಧ್ಯಮಯವಾದ ಸಂಪ್ರದಾಯಗಳು ನೆಲೆಯೂರಿವೆ, ಹಿಂದೂ ಧಾರ್ಮಿಕ ಆಚರಣೆಗಳನೇಕವು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಅರ್ಥಗಳನ್ನು ಹೊಂದಿವೆ ಎಂದು ತಿಳಿಸಿದರು.

ಹೆಗ್ಗಾರಿನ ಅರುಣೋದಯ ಯುವಕ ಸಂಘ ಹಾಗೂ ಕಸ್ತೂರಬಾ ಯುವತಿ ಮಂಡಳದ ಆಶ್ರಯದಲ್ಲಿ ಶ್ರೀಬಲಮುರಿ ಮಹಾಗಣಪತಿ ದೇವಸ್ಥಾನದ ಆವಾರದಲ್ಲಿ ಯುಗಾದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾರಂಭದಲ್ಲಿ ಪಂಚಾಂಗ ಪಠಣವನ್ನು ವೇದಮೂರ್ತಿ ವಿ. ಎನ್. ಭಟ್ಟ ಅವರು ನಡೆಸಿಕೊಟ್ಟರು, ನಾರಾಯಣ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದು ಆಶಯ ನುಡಿಗಳನ್ನಾಡಿದರು.

ಸಭಾ ಕಾರ್ಯಕ್ರಮದ ನಂತರ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು, ಸ್ಥಳೀಯ ಯುವ ಕಲಾವಿದರು ಹಾಗೂ ಶಿವರಾಂ ಭಾಗ್ವತ ಹೆಗ್ಗಾರ ಅವರು ಸಂಗೀತ ಕಛೇರಿ ನೆರವೇರಿಸಿಕೊಟ್ಟರು,

ರಾಜೇಂದ್ರ ಭಾಗ್ವತ ಹಾಗೂ ಸತೀಶ ಹೆಗ್ಗಾರ ಪಕ್ಕವಾದ್ಯಗಳಲ್ಲಿ ಸಹಕರಿಸಿದರು. ಪ್ರಸನ್ನ ಭಾಗ್ವತ ಸ್ವಾಗತಿಸಿದರು,

ಸುಧಾಕರ ಭಟ್ ಹಾಗು ಗಾಯತ್ರಿ ಕಲಗಾರೆ ನಿರೂಪಿಸಿದರು, ರಾಮಕೃಷ್ಣ ಗಾಂವ್ಕರ ವಂದಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading