20-5-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತುಡುಗುಣಿಯಿಂದ ಸೂರಿಮನೆಗೆ ಹೋಗುವ ರಸ್ತೆಗೆ ತುಡುಗುಣಿ ಹೊಳೆಯ ಪಕ್ಕದಲ್ಲಿ ಶುಕ್ರವಾರ ಮತ್ತೆ ಕುಸಿತ ಸಂಭವಿಸಿದೆ.

ADVT

ಕಳೆದ ವರ್ಷ ಸುರಿದ ಭಾರೀ ಮಳೆಗೆ ಇದೇ ಸ್ಥಳದಲ್ಲಿ ರಸ್ತೆ ಕುಸಿತವಾಗಿತ್ತು. ಆಗ ಮರಳಿನ ಚೀಲಗಳನ್ನು ಜೋಡಿಸಿ ತಾಕ್ಕಾಲಿಕವಾಗಿ ಸರಿಪಡಿಸಲಾಗಿತ್ತು.

ADVT

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮರಳಿನ ಚೀಲಗಳು ಜಾರಿ ಹೋಗಿ ರಸ್ತೆ ಮತ್ತೆ ಕುಸಿತಗೊಂಡಿದೆ. ರಸ್ತೆ ಇನ್ನಷ್ಟು ಕುಸಿದರೆ ಸೂರಿಮನೆ ಭಾಗದ ಊರುಗಳಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ADVT

ಹಾಗೇನಾದರೂ ಆದರೆ ಮಳೆಗಾಲದಲ್ಲಿ ಹೊರಗಿನ ಊರುಗಳ ಸಂಪರ್ಕ ಕಡಿತವಾಗಿ ಪರಿತಪಿಸಬೇಕಾದ ಆತಂಕದ ಪರಿಸ್ಥಿತಿಯಲ್ಲಿ ಸೂರಿಮನೆ ಊರಿನ ನಾಗರಿಕರು ಬದುಕುವಂತಾಗಿದೆ.

ADVT

ಇತ್ತೀಚೆಗಷ್ಟೇ ತುಡುಗುಣಿಯಿಂದ ಸೂರಿಮನೆಗೆ ಸಿಮೆಂಟ್ ರಸ್ತೆ ಮಂಜೂರಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಕೆಲಸದ ಪ್ರಾರಂಭಕ್ಕೆ ಮಳೆಗಾಲ ಮುಗಿಯುವ ವರೆಗೆ ಕಾಯುವುದು ಅನಿವಾರ್ಯವೆಂದು ಹೇಳಲಾಗುತ್ತಿದೆ.

ADVT

ಸಚಿವ ಶಿವರಾಮ ಹೆಬ್ಬಾರ್ ಅವರು ಜಿ.ಪಂ.ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVT

ಜನರಿಗೆ ತೊಂದರೆಯಾಗದಂತೆ ಕೂಡಲೇ ರಸ್ತೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು.

ADVT

ಉಮ್ಮಚ್ಗಿ ಗ್ರಾ.ಪಂ.ನ ಸ್ಥಳೀಯ ಸದಸ್ಯರಾದ ಖೈತಾನ್ ಡಿಸೋಜ ಮತ್ತು ಅಶೋಕ ಪೂಜಾರಿ ಮುಂತಾದವರು ಇದ್ದರು.

ADVT

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading