24-5-2022. ಮಂಗಳವಾರ.
E-YELLAPUR.COM NEWS ಯಲ್ಲಾಪುರ.
ಕಳೆದ ಮೇ.11 ರಂದು ಸಾಯಂಕಾಲ 6 ಗಂಟೆಯಿಂದ, ಮೇ.12ರಂದು ಬೆಳಗ್ಗೆ 9.30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಸಂಭ್ರಮ್ ಕ್ರಾಸ್ ಹತ್ತಿರ ಇರುವ
ADVT
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಗೋಡೆಯ ಕಿಟಕಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ಲನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಕಿತ್ತು ತೆಗೆದು ಬ್ಯಾಂಕ್ ಒಳಗಡೆ ಒಳಪ್ರವೇಶ ಮಾಡಿ ಬ್ಯಾಂಕ್ನ ನೆಲ ಮಹಡಿಯಲ್ಲಿರುವ ಕಬ್ಬಿಣದ ಕಪಾಟನ್ನು ಮೀಟಿ ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ADVT
ಈ ಪ್ರಕರಣದ ತನಿಖೆ ನಡೆಸಿದ ಪೋಲೀಸರು ಆರೋಪಿತನಾದ ಉಮೇಶ ತಂದೆ ಗೋವಿಂದಪ್ಪಾ ಹಾನಗಲ್ ಪ್ರಾಯ: 40 ವರ್ಷ, ಕಾಳಮ್ಮನಗರ, ಆಶ್ರಯ ಕಾಲೋನಿ, ಯಲ್ಲಾಪುರ
ADVT
ಈತನನ್ನು ಮಂಗಳವಾರ ಬಂಧಿಸಿದ್ದಾರೆ. ಈತ ಟೈಲ್ಸ್ ಕೆಲಸ ಮಾಡುತ್ತಿದ್ದ. ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್, ಒಂದು ಕಾರ್ ಮತ್ತು ಒಂದು ಮೋಟಾರ ಸೈಕಲ್ನ್ನು ಜಪ್ತುಪಡಿಸಿಕೊಂಡು ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.
ADVT
ಈ ಕಾರ್ಯಾಚರಣೆಯನ್ನು ಜಿಲ್ಲಾ ಎಸ್ಪಿ ಡಾ.ಸುಮನ ಪೆನ್ನೇಕರ,ಹೆಚ್ಚುವರಿ ಪೊಲೀಸ ಅಧೀಕ್ಷಕರಾದಎಸ್. ಬದರಿನಾಥ, ಪೊಲೀಸ್ ಉಪಾಧೀಕ್ಷಕರಾದ ರವಿ ನಾಯ್ಕ ಅವರ
ADVT
ಮಾರ್ಗದರ್ಶನದಲ್ಲಿ ಯಲ್ಲಾಪುರ ಠಾಣೆಯ ಸಿಪಿಐ ಸುರೇಶ ಯಳ್ಳೂರ ಅವರ ನೇತ್ರತ್ವದಲ್ಲಿ ಕೈಗೊಳ್ಳಲಾಗಿದ್ದು, ಪಿ.ಎಸ್.ಐ ಅಮೀನಸಾಬ ಎಮ್.ಅತ್ತಾರ, ಪಿ.ಎಸ್.ಐ ಮಂಜುನಾಥ ಗೌಡರ, ಪ್ರೊಬೇಶ್ನರಿ ಪಿ.ಎಸ್.ಐ ಶಿವಕುಮಾರ,
ADVT
ಹಾಗೂ ಸಿಬ್ಬಂದಿಗಳಾದ ಬಸವರಾಜ, ಮಹ್ಮದ ಶಪೀ, ಗಜಾನನ, ಚಿದಾನಂದ, ಶೋಭಾ, ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು. ಈ ಪ್ರಕರಣವನ್ನು ಬೇಧಿಸಿದ ಪೋಲೀಸರಿಗೆ ಎಸ್ಪಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ADVT
ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಪೋಲೀಸರಿಂದ ವಿಶೇಷ ಸೂಚನೆ:
1) ಬ್ಯಾಂಕ್/ಎಟಿಎಮ್/ ಸೇವಾ ಸಹಕಾರಿ ಸಂಘಗಳ ಒಳಗೆ ಹಾಗೂ ಹೊರಗಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಹ ಉತ್ತಮ ಗುಣಮಟ್ಟದ CC ಕ್ಯಾಮೆರಾಗಳನ್ನು ಹಾಗೂ ರಸ್ತೆಗಳ ಕಡೆಗೆ CC ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.
ADVT
2) ಸೆಕ್ಯುರಿಟಿ ಗಾರ್ಡ್ನ್ನು ಕಡ್ಡಾಯವಾಗಿ ನೇಮಿಸಿಕೊಳ್ಳುವುದು, ಹಾಗೂ ಗೋಡೆಗೆ ಉತ್ತಮವಾದ ಕಿಟಕಿ ಬಾಗಿಲುಗಳನ್ನು ಅಳವಡಿಸುವುದು.
3) ಸುಭದ್ರವಾದ ಸ್ಟ್ರಾಂಗ್ ರೂಮ್ ಲಾಕರ್/ ಬಾಗಿಲುಗಳನ್ನು ಅಳವಡಿಸುವುದು ಹಾಗೂ ಅದರಲ್ಲಿ ಕೂಡ ಕಡ್ಡಾಯವಾಗಿ CC ಕ್ಯಾಮೆರಾವನ್ನು ಅಳವಡಿಸಬೇಕು.
4) ಸೈರನ್/ದೂರವಾಣಿ ಮೂಲಕ ಮಾಹಿತಿ ತಿಳಿಸುವ ತಂತ್ರಜ್ಞಾನವನ್ನು ಅಳವಡಿಸುವುದು, ಮತ್ತು ಉನ್ನತ ಮಟ್ಟದ CC ಕ್ಯಾಮೇರಾವನ್ನು ಅಳವಡಿಸಬೇಕು.
5) DVR/NVR ಕಳ್ಳರಿಗೆ ಕಾಣದಂತೆ/ಕೀಳಲು/ಕಳುವುಮಾಡಲು ಬಾರದಂತೆ ಸುಭದ್ರವಾಗಿ ಇರಬೇಕು.
6) ಬ್ಯಾಂಕಿಗೆ ಬರುವ ಗ್ರಾಹಕರ ಸ್ಪಷ್ಟವಾದ ಹೆಸರು ವಿಳಾಸ, ಮೊಬೈಲ ನಂ, ಎಕೌಂಟ ನಂಬರ ಇತ್ಯಾದಿಗಳನ್ನು, ರಜಿಸ್ಟರ್ದಲ್ಲಿ ದಾಖಲಿಸಬೇಕು. ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಪೋಲೀಸರಿಗೆ ಮಾಹಿತಿ ನೀಡಬೇಕು.
7) ಸಾರ್ವಜನಿಕರು ತಮ್ಮ ವ್ಯವಹಾರವನ್ನು ಸುರಕ್ಷಿತವಾಗಿರುವ ಬ್ಯಾಂಕಿನಲ್ಲಿ ನಡೆಸಲು ಸಿಪಿಐ ಸುರೇಶ ಯಳ್ಳೂರು ಕೋರಿದ್ದಾರೆ.
ADVT
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
- ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
by TEAM E – YELLAPUR
ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ…
Read more: ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ ಗಂಧದ ಮರದ ತುದಿಯ ಭಾಗವನ್ನು…
Read more: ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಯಲ್ಲಾಪುರ…
Read more: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ…
Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು ಯಲ್ಲಾಪುರ ಪಟ್ಟಣದ…
Read more: ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related