2-4-2022. ಶನಿವಾರ.
E-YELLAPUR.COM NEWS
ಯುಗಾದಿ ವಿಶೇಷಾಂಕ.
ಯುಗದ ಆದಿ ಅಥವಾ ಯುಗದ ಹಾದಿಯೇ ಯುಗಾದಿ ಎನ್ನುವುದು ಸನಾತನ ಧರ್ಮದಲ್ಲಿ ಉಲ್ಲೇಖಿಸಲ್ಪಟ್ಟ ಸಂಗತಿಯಾಗಿದೆ. ಭಾರತೀಯರಾದ ನಮಗೆ ಯುಗಾದಿ ಹಬ್ಬದ ದಿನವೇ ನವ ವರ್ಷದ ಪ್ರಾರಂಭ.
ವಸಂತ ಋತುವಿನ ಆಗಮನದೊಂದಿಗೆ ಶುಭಕೃತ್ ನಾಮ ಸಂವತ್ಸರ ಇಂದಿನಿಂದ ಆರಂಭವಾಗಿದೆ. ಶುಭಕೃತ್ ಎಂದರೆ ಶುಭವನ್ನು ಉಂಟುಮಾಡುವುದು. ಹಾಗಾಗಿ ಈ ವರ್ಷ ಹೆಚ್ಚು ಶುಭ ಫಲಗಳನ್ನು ನಿರೀಕ್ಷಿಸಲಾಗಿದೆ.
ಪೃಕೃತಿಯಲ್ಲಿಯೂ ಸಹ ಯುಗಾದಿಯ ಸಂದರ್ಭದಲ್ಲಿ ಹೊಸ ವರ್ಷದ ಶುಭಸೂಚನೆಗಳು ಗೋಚರಿಸುತ್ತವೆ. ಈ ಯುಗಾದಿಯನ್ನು ಚಾಂದ್ರಮಾನ ಯುಗಾದಿ ಎನ್ನುತ್ತಾರೆ
. ನಮ್ಮ ದೇಶದ ಕರ್ನಾಟಕದ ಬಹುತೇಕ ಭಾಗಗಳಲ್ಲಿ, ಮಹಾರಾಷ್ಟ್ರ,ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿಯೂ ಸಹ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ವಿವಿದೆಡೆ ಆಚರಣೆಗಳು ಸ್ವಲ್ಪ ಭಿನ್ನವಾಗಿದ್ದರೂ ಈ ಆಚರಣೆಯ ಉದ್ದೇಶ ಒಂದೇ ಆಗಿದೆ.
ಪಂಚಾಂಗ ಶ್ರವಣಕ್ಕೆ ಆದ್ಯತೆ.;
ಯುಗಾದಿಯ ಸಂದರ್ಭದಲ್ಲಿ ಪಂಚಾಗ ಪಠಣ, ಶ್ರವಣಕ್ಕೆ ವಿಶೇಷ ಆದ್ಯತೆ ಇದೆ.
ತಿಥಿ,ವಾರ,ನಕ್ಷತ್ರ,ಯೋಗ,ಕರಣ ಇವುಗಳೇ ಪ್ರಧಾನವಾಗಿರುವುದೇ ಪಂಚಾಂಗ. ಪಂಚಾಗ ಶ್ರವಣದಿಂದ ಶುಭಫಲಗಳು ಲಭ್ಯವಾಗುತ್ತವೆ ಎನ್ನುವುದು ಶ್ರದ್ಧಾವಂತರ ನಂಬಿಕೆಯಾಗಿದೆ.
ತಿಥಿ ಶ್ರವಣದಿಂದ ಶ್ರೇಯಸ್ಸು,ವಾರದ ಶ್ರವಣದಿಂದ ಆಯುಷ್ಯ ವೃದ್ಧಿ,ನಕ್ಷತ್ರ ಪಠಣದಿಂದ ಪಾಪ ಪರಿಹಾರ,ಯೋಗ ಪಠಣದಿಂದ, ಮನನದಿಂದ ಆರೋಗ್ಯ ವೃದ್ಧಿ, ಕರಣ ಶ್ರವಣ,ಮನನದಿಂದ ಒಳಿತು ಆಗುತ್ತದೆ. ನಿತ್ಯ ಪಂಚಾಂಗ ಶ್ರವಣ,ಮನನ ಶ್ರೇಯಸ್ಕರವಾಗಿದೆ.
ಬೇವು-ಬೆಲ್ಲ ; ಬದುಕು ಬಂಗಾರ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು ಬೆಲ್ಲ ಮಿಶ್ರಣವನ್ನು ಸೇವಿಸುವುದು ಸಂಪ್ರದಾಯ ಮಾತ್ರವಲ್ಲ ಆರೋಗ್ಯ ವರ್ಧನೆಗೂ ಸಹಕಾರಿಯಾಗಿದೆ.
ಬೇವು,ಬೆಲ್ಲ ಸೇವನೆಯು ದೇಹವನ್ನು ರೋಗಮುಕ್ತವಾಗಿಸಿ, ಸಧೃಢವಾಗಿಸುತ್ತದೆ. ತೈಲ ಅಭ್ಯಂಜನ, ಮನೆ ದೇವರ ಆರಾಧನೆ,ಕುಲದೇವರ ಪೂಜೆ,
ವಿವಿಧ ಭಕ್ಷ್ಯಗಳನ್ನು ನೈವೇದ್ಯವಾಗಿ ದೇವರಿಗೆ ಸಮರ್ಪಿಸುವುದು, ಹೊಸ ವಸ್ತ್ರ ಧಾರಣೆ, ಉತ್ಸವ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು, ಸಿಹಿ ಊಟ, ಲೋಕ ಕಲ್ಯಾಣಕ್ಕಾಗಿ
ಭಗವಂತನಲ್ಲಿ ಪ್ರಾರ್ಥನೆ ಮುಂತಾದವು ಈ ಹಬ್ಬದ ಆಚರಣೆಗಳೆ ಆಗಿವೆ.
ಶುಭಕೃತ್ ನಾಮ ಸಂವತ್ಸರವು ಎಲ್ಲರಿಗೂ ಶುಭ ತರಲಿ, ಒಳಿತನ್ನು ಉಂಟುಮಾಡಲಿ ಎಂದು ಹಾರೈಸುತ್ತದೆ.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
- ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
by TEAM E – YELLAPUR
ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ…
Read more: ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ ಗಂಧದ ಮರದ ತುದಿಯ ಭಾಗವನ್ನು…
Read more: ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಯಲ್ಲಾಪುರ…
Read more: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ…
Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು ಯಲ್ಲಾಪುರ ಪಟ್ಟಣದ…
Read more: ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related