30-1-2022. ರವಿವಾರ.

E-YELLAPUR.COM NEWS. ಯಲ್ಲಾಪುರ.
ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾಮಠವಾದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಆವಾರದಲ್ಲಿ ಭಾನುವಾರ ಬೆಳಿಗ್ಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು.

ಬೆಳಿಗ್ಗೆ 6.30 ರಿಂದ 9.30 ರ ವರೆಗೆ ನಡೆದ ಶ್ರಮದಾನದಲ್ಲಿ ಪಾಲ್ಗೊಂಡ ಭಕ್ತರು ಶ್ರಮದಾನದ ಮೂಲಕ ದೇವಾಲಯದ ಆವಾರವನ್ನು ಸ್ವಚ್ಛಗೊಳಿಸಿದರು.

ನಂತರ ಆಜಾದಿ ಕಾ ಅಮೃತಮಹೋತ್ಸವದ ಪ್ರಯುಕ್ತ ದೇಶದಲ್ಲಿ ನಡೆಯುತ್ತಿರುವ ಕೋಟಿ ಸೂರ್ಯ ನಮಸ್ಕಾರ ಯಜ್ಞದ ಅಂಗವಾಗಿ ದೇವಾಲಯದ ಆವಾರದಲ್ಲಿ ಸೂರ್ಯ ನಮಸ್ಕಾರ ನಡೆಯಿತು.

ಭಾರತ ಮಾತೆಗೆ ವಂದನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಗದೀಶ ದೀಕ್ಷಿತ, ನರಸಿಂಹ ಗೇರಗದ್ದೆ, ನಾಗೇಂದ್ರ ಕವಾಳೆ, ಜಿ.ಎನ್.ಭಟ್ ತಟ್ಟಿಗದ್ದೆ, ಶ್ರೀನಿವಾಸ ಗಾಂವ್ಕಾರ್, ಗೋಪಾಲಕ್ರಷ್ಣ ಭಟ್, ಪ್ರಕಾಶ ಭಟ್, ಎಸ್.ವಿ.ಭಟ್ ಹುಲಗಾನ್, ಕ್ರಷ್ಣ ಗಾಂವ್ಕಾರ್, ವಿಶ್ವನಾಥ ಭಟ್ ಶೀರ್ಲೆ, ವಾಸುದೇವ ಹೆಗಡೆ,

ADVT

ಸುಧೀಂದ್ರ ಪೈ, ಆದಿತ್ಯ ಗುಡಿಗಾರ್, ಡಿ.ಎನ್.ಹೆಗಡೆ, ಮಾಚಣ್ಣ ಗವೇಗುಳಿ ರಾಜೇಶ ಹೆಗಡೆ ಹಾಗೂ ಭಕ್ತರು, ಗ್ರಾಮಸ್ಥರು, ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಇದ್ದರು.

FACEBOOK GROUP – https://www.facebook.com/groups/593852164946589/

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading