E-YELLAPUR.COM NEWS ಯಲ್ಲಾಪುರ. ರಾಜನಹಳ್ಳಿಯ ವಾಲ್ಮೀಕಿ ಮಹಾಸಂಸ್ಥಾನಕ್ಕೆಂದು ಪಟ್ಟಣದ ಬಿಕ್ಕು ಗುಡಿಗಾರ ಕೇಂದ್ರದಲ್ಲಿ ತಯಾರಿಸಲಾದ ಬೃಹತ್ ಭವ್ಯ ರಥವನ್ನು ಭಾನುವಾರ ರಾಜನಹಳ್ಳಿಗೆ ಟ್ರಕ್ ಮೂಲಕ ಕೊಂಡೊಯ್ಯಲಾಯಿತು. ಸಚಿವ ಶಿವರಾಮ ಹೆಬ್ಬಾರ್ ಅವರು ರಥವನ್ನು ವೀಕ್ಷಿಸಿ ಬೀಳ್ಕೊಟ್ಟರು.
ಹಲವು ವಿಶೇಷತೆಗಳಿಂದ ಕೂಡಿದ ಈ ಆಕರ್ಷಕ ರಥದಲ್ಲಿ ರಾಮಾಯಣದ ಪ್ರಮುಖ ಘಟನೆಗಳ ಚಿತ್ರಾವಳಿಯನ್ನು ರಚಿಸಲಾಗಿದೆ. ಆಕರ್ಷಕ ಕುಸುರಿ ಕೆತ್ತನೆ ಇದೆ. ರಂಜಲು,ಸಾಗವಾನಿ,ವಾಟೆ ಮರಗಳನ್ನು ಬಳಸಿ ತಯಾರಿಸಲಾದ ಈ ರಥವನ್ನು ಬಿಡಿ,ಬಿಡಿಯಾಗಿ ರಾಜನಹಳ್ಳಿಗೆ ಕೊಂಡೊಯ್ದು, ಪುನಃ ಜೋಡಿಸಿ, ಅಂತಿಮ ಹಂತದ ಕೆಲಸ ಪೂರ್ಣಗೊಳಿಸಲಾಗುತ್ತದೆ.
ನಾಳೆ ಮುನ್ನೆಚ್ಚರಿಕಾ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ.
ಎಲ್ಲ ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮಕ್ಕೆ ನಾಳೆ ಬೆಳಿಗ್ಗೆ ಸಚಿವ ಶಿವರಾಮ ಹೆಬ್ಬಾರ್ ಅವರು ಚಾಲನೆ ನೀಡಲಿದ್ದಾರೆ. 60 ವರ್ಷ ಮೇಲ್ಪಟ್ಟ ಕೋಮಾರ್ಬಿಡ್ ಇರುವ ಹಿರಿಯ ನಾಗರಿಕರಿಗೂ ಮುನ್ನೆಚ್ಚರಿಕಾ ಡೋಸ್ ನೀಡಲಾಗುವುದು. ತಾಲೂಕಾ ಆಸ್ಪತ್ರೆಯ ಆವಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ.
ಇಂದು ನಂದೊಳ್ಳಿಯಲ್ಲಿ ಒಂದು ಕೋವಿಡ್ ಪ್ರಕರಣ.
ತಾಲೂಕಿನ ನಂದೊಳ್ಳಿಯಲ್ಲಿ (ಯಲ್ಲಾಪುರ ನಗರವೂ ಸೇರಿ) ಇಂದು ಒಂದು ಕೋವಿಡ್ ಪ್ರಕರಣ ಧೃಢಪಟ್ಟಿದೆ.