ಯಲ್ಲಾಪುರ ಪಟ್ಟಣದ ಎಪಿಎಂಸಿ ಸಮೀಪದ ಜಮೇಜಡ್ಡಿ ಕ್ರಾಸ್ ಹತ್ತಿರ, ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ಬುಧವಾರ ಸಂಜೆ ಕಾರು ಹಾಗೂ ಕೋಳಿಗಳನ್ನು ಸಾಗಿಸುವ ಬುಲೆರೋ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಪಾದ ಭಟ್ಟ ಹಾಗೂ ಲಕ್ಷ್ಮೀ ದೇಸಾಯಿ ಅವರಿಗೆ ಗಾಯವಾಗಿದೆ. ಅಪಘಾತದ ರಭಸಕ್ಕೆ ಬುಲೆರೋ ವಾಹನವು ರಸ್ತೆಯ ಅಂಚಿನ ಗಟಾರಕ್ಕೆ ಇಳಿದು, ಕಾಡಿಗೆ ನುಗ್ಗಿದೆ.

ಅಪಘಾತದಲ್ಲಿ ಕಾರು ಹಾಗೂ ಪಿಕ್ ಅಪ್ ವಾಹನ ಜಕಂಗೊಂಡಿವೆ. ಕೆಲವು ಸಮಯ ಈ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading