ಇತ್ತೀಚೆಗೆ ನಿಧನರಾದ ಯಕ್ಷಗಾನ ಹಾಸ್ಯಕಲಾವಿದ ಶ್ರೀಧರ ಕಾಸರಕೋಡ ವರಿಗೆ ಹುಲ್ಲೋರಮನೆಯ ಶ್ರೀ ಗಜಾನನ ಮಾರುತಿ ತಾಳಮದ್ದಳೆ ಕೂಟದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೂಟದ ಪ್ರಮುಖರಾದ ಜಿ.ಎಸ್.ಭಟ್ಟ ತಟ್ಟಿಗದ್ದೆ, ಗಣಪತಿ ಭಟ್ಟ ಶಿಂಬಳಗಾರ, ನಾಗೇಂದ್ರ ಭಾಗ್ವತ್, ವಿ.ಟಿ.ಹೆಗಡೆ, ವೆಂಕಟ್ರಮಣ ಭಟ್ಟ, ನಾರಾಯಣ ಭಾಗ್ವತ್, ವಿಶ್ವೇಶ್ವರ ಹೆಬ್ಬಾರ್ ಮುಂತಾದವರು ಇದ್ದರು.

ಇತ್ತೀಚೆಗೆ ನಿಧನರಾದ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಗಣಪತಿ ಹರಿ ಗಾಂವ್ಕರ್ (ಮಾನಿಗದ್ದೆಕುಂಬ್ರಿ) ಅವರಿಗೆ ಮಂಗಳವಾರ ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಸಂಘದ ಅಧ್ಯಕ್ಷರ ಉಮೇಶ್ ಭಾಗ್ವತ್, ನಿರ್ದೇಶಕರಾದ ಶ್ರೀಪಾದ್ ಗಾಂವ್ಕರ್,ಶ್ರೀನಾಥ್ ಹೆಗಡೆ, ರಾಘವೇಂದ್ರ ಭಟ್ಟ ಸೂತ್ರೆ, ಸಿಬ್ಬಂದಿಗಳಾದ ದತ್ತಾತ್ರಯ ಹೆಗಡೆ, ರಾಘವೇಂದ್ರ ಭಟ್ಟ ಬೆಳಸೂರ್, ಪರಮೇಶ್ವರ್ ಕೋಮಾರ್, ಪ್ರಮೋದ್ ಹೆಬ್ಬಾರ್, ಗಣಪತಿ ಗಾಂವ್ಕರ್ ಸ ಹಾಗೂ ಗ್ರಾಮಸ್ಥರು, ಸ್ಥಳೀಯ ಯುವಕ ಮಂಡಳದ ಸದಸ್ಯರು, ಕಳಚೆ ಪ್ರೀಮಿಯರ್ ಲೀಗ್ ಸದಸ್ಯರು ಇದ್ದರು.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading