3-9-2021. ಶುಕ್ರವಾರ.

e-yellapur.com
(ಪ್ರಾಯೋಜಿತ.)

ಕಳೆದ 60 ವರ್ಷಗಳಿಂದ ಕಿರಾಣಿ ಹಾಗೂ ನಿತ್ಯೋಪಯೋಗಿ ವಸ್ತುಗಳ ಮಾರಾಟದಲ್ಲಿ ವಿಶೇಷ ಹೆಸರು ಗಳಿಸಿದ, ಪ್ರಾಮಾಣಿಕ ವ್ಯವಹಾರದಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಯಲ್ಲಾಪುರ ನಗರದ ಸುಪ್ರಸಿದ್ಧ, ವಿಶಾಲ ವ್ಯಾಪಾರಿ ಮಳಿಗೆಯಾದ ಅನ್ನಪೂರ್ಣಾ ಸೂಪರ್ ಮಾರ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ ಮತ್ತು ಹಲವಾರು ಕೊಡುಗೆಗಳನ್ನು ಘೋಷಿಸಲಾಗಿದೆ.

ಸೆಪ್ಟೆಂಬರ್ 1 ರಿಂದ ಸೆ.30 ರವರೆಗೂ ಒಂದು ತಿಂಗಳ ಕಾಲ ಈ ಕೊಡುಗೆಗಳು ಹಾಗೂ ವಿಶೇಷ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತವೆ. ಈ ಮಳಿಗೆಯಲ್ಲಿ ಶುದ್ಧ, ಸ್ವಚ್ಛವಾದ ಎಲ್ಲ ಬಗೆಯ ಕಿರಾಣಿ ವಸ್ತುಗಳು, ಎಲ್ಲ ಬಗೆಯ ನಿತ್ಯೋಪಯೋಗಿ ವಸ್ತುಗಳು, ಪ್ರಸಿದ್ಧ ಬ್ರಾಂಡ್‍ಗಳ ನಾನಾ ನಮೂನೆಯ ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು,

ಪಾರಂಪರಿಕ ಆಯುರ್ವೇದಿಕ ಗಿಡಮೂಲಿಕೆಗಳು, ಐಸ್ ಕ್ರಿಂಗಳು, COLD DRINKS ಗಳು. ಹಬ್ಬಗಳ ಸಂದರ್ಭಗಳಲ್ಲಿ ಬಳಸುವ ವಿವಿಧ ಪರಿಕರಗಳು, ಗಣೇಶ ಮಂಟಪಗಳಿಗೆ ಬಳಸುವ ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿಗಳು, ರುಚಿ-ರುಚಿಯಾದ ಗೃಹೋತ್ಪನ್ನಗಳು, ಗಿಫ್ಟ್ ಐಟಂಗಳು ಹೋಲ್ ಸೇಲ್ ಹಾಗೂ ರಿಟೇಲ್ ದರಗಳಲ್ಲಿ ಸ್ಫರ್ಧಾತ್ಮಕ ಬೆಲೆಗಳಲ್ಲಿ ಸಿಗುತ್ತಿರುವುದು ವಿಶೇಷವಾಗಿದೆ.

ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು ;
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅನ್ನಪೂರ್ಣಾ ಸೂಪರ್ ಮಾರ್ಟ್‍ವತಿಯಿಂದ ವಿಶೇಷ ಆಫರ್ ಗಳನ್ನು ಹಾಗೂ ನಿತ್ಯೋಪಯೋಗಿ ವಸ್ತುಗಳ ಖರೀದಿಯ ಮೇಲೆ ಭರ್ಜರಿ, ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ರಿಟೇಲ್ ದರದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುವವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಲು ಕೋರಲಾಗಿದೆ. ಒಂದು ಸಾವಿರ ಮೇಲ್ಪಟ್ಟು ಕಿರಾಣಿ ವಸ್ತುಗಳನ್ನು ಖರೀದಿಸಿದರೆ ಒಂದು ಕೆ.ಜಿ.ಸಕ್ಕರೆಯನ್ನು ಹಾಗೂ 1 ಸಾವಿರದ ನಂತರ ಪ್ರತೀ ಐದು ನೂರು ರೂ ವಸ್ತುಗಳ ಖರೀದಿಗಳಿಗೆ ಅರ್ಧ ಕೆ.ಜಿ.ಸಕ್ಕರೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಐದು ಸಾವಿರ ಮೇಲ್ಪಟ್ಟು ಕಿರಾಣಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಉತ್ತಮ ಬಾಳಿಕೆಯ ವಿವಿಧ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೇ ರೀತಿ ಇನ್ನಷ್ಟು ಕೊಡುಗೆಗಳು ಲಭ್ಯವಿರುತ್ತವೆ.

whatsapp ನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಸೇವೆ ;
ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಗ್ರಾಹಕರು 2 ಸಾವಿರದಷ್ಟು ಅಥವಾ ಮೇಲ್ಪಟ್ಟು ವಸ್ತುಗಳನ್ನು whatsapp ಮೂಲಕ ಆರ್ಡರ್ ಮಾಡಿದರೆ ಆ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದು ಗ್ರಾಹಕರಿಗೆ ಅತ್ಯಂತ ಖುಷಿ ನೀಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಆಸಕ್ತ ಗ್ರಾಹಕರು whatsapp 9448611531 ಸಂಖ್ಯೆಗೆ ವಸ್ತುಗಳನ್ನು ಆರ್ಡರ್ ಮಾಡಿದರೆ ವಸ್ತುಗಳನ್ನು ಮನೆಯ ಬಾಗಿಲಿಗೇ ತಲುಪಿಸಲಾಗುವುದು.

ಆರು ದಶಕಗಳ ಹಿಂದೆ ಪ್ರಸಿದ್ಧ ವರ್ತಕರು, ಸಮಾಜಸೇವಕರು ಶಿಕ್ಷಣ ಪ್ರೇಮಿಗಳೂ ಆಗಿದ್ದ ದಿ.ವೆಂಕಟ್ರಾವ್ ಸೀತಾರಾಮ ಬಾಳಗಿ ಅವರಿಂದ ಪ್ರಾರಂಭವಾದ ಈ ಮಳಿಗೆಯು ಇಂದು ಹಲವಾರು ಹೊಸತನಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕ, ಗ್ರಾಹಕ ಸ್ನೇಹಿ ವ್ಯವಹಾರದಿಂದಾಗಿ ಜನರ ಮನಗೆದ್ದಿದೆ.

ಪ್ರಸ್ತುತ ದಿ.ವೆಂಕಟ್ರಾವ್ ಸೀತಾರಾಮ ಬಾಳಗಿ ಅವರ ಮಗ ನಂದನ ಬಾಳಗಿಯವರು ಈ ಮಳಿಗೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. LIONS CLUB ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಇವರ ಕುಟುಂಬದ ಅನ್ನಪೂರ್ಣಾ ರೈಸ್ ಮಿಲ್ ಉದ್ಯಮವೂ ಸಹ ಪ್ರಸಿದ್ಧವಾಗಿದ್ದು, ಅತ್ಯಾಧುನಿಕ ಮಷಿನರಿಗಳಿಂದ ಭತ್ತದ ಗುಣಮಟ್ಟದ ಮಿಲ್ಲಿಂಗ್ ಮಾಡುವಲ್ಲಿ ಸಾವಿರಾರು ಭತ್ತ ಬೆಳೆಗಾರರ ಜೀವನಾಡಿಯಾಗಿದೆ.

ಅನೇಕ ದಶಕಗಳಿಂದ ಈ ಮಳಿಗೆಯನ್ನು ನಡೆಸುತ್ತಿರುವ ನಾವು ಪ್ರಸಕ್ತ ಹಬ್ಬಗಳ ಸಂದರ್ಭದಲ್ಲಿ ಗ್ರಾಹಕರಿಗೆ ಹಲವಾರು ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದೇವೆ. ಎಲ್ಲ ಬಗೆಯ ಕಿರಾಣಿ ವಸ್ತುಗಳು, ನಿತ್ಯೋಪಯೋಗಿ ವಸ್ತುಗಳ ರಿಟೇಲ್ ಖರೀದಿಗೆ ಈ ಕೊಡುಗೆಗಳು ಲಭ್ಯ ಇವೆ. ಗ್ರಾಹಕರ ಸಂತೃಪ್ತಿಯೇ ನಮಗೆ ಇನ್ನಷ್ಟು ಸೇವೆ ನೀಡಲು ಪ್ರೇರೇಪಣೆಯಾಗಿದೆ. ; ನಂದನ ಬಾಳಗಿ. ಮಾಲಕರು. ಅನ್ನಪೂರ್ಣಾ ಸೂಪರ್ ಮಾರ್ಟ್. ಯಲ್ಲಾಪುರ.


ವಿಳಾಸ ;
ಅನ್ನಪೂರ್ಣಾ ಸೂಪರ್ ಮಾರ್ಟ್.
ವೆಂಕಟ್ರಮಣ ಮಠದ ಹತ್ತಿರ. ಹುಬ್ಬಳ್ಳಿ ರಸ್ತೆ.
ಯಲ್ಲಾಪುರ.
ಫೋನ್ ನಂಬರ್ ; 9036523960, 9448611531

=====================================

–ADVT–

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading