ಯಲ್ಲಾಪುರದಲ್ಲಿ ಬುಧವಾರ ಜೀವವೈವಿಧ್ಯತಾ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಜಗದೀಶ ವಡ್ನಾಳ ಉದ್ಘಾಟಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ಜೀವವೈವಿಧ್ಯ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ನಾಟಿ ವೈದ್ಯರನ್ನು, ಜೇನು ಕೃಷಿ ಸಾಧಕರನ್ನು ಸನ್ಮಾನಿ ಗೌರವಿಸಲಾಯಿತು. ಸಿಸಿಎಫ್ ಹೀರಾಲಾಲ್, ಡಿಸಿಎಫ್ ಅಜೀಜ್, ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಆಶೀಸರ. ತಾಪಂ ಆಡಳಿತಾಧಿಕಾರಿ ಕೆ.ಎಚ್. ಪಾಂಡು,

ತಾ.ಪಂ.ಕಾರ್ಯನಿರ್ವಹಣಧಿಕಾರಿ ರಾಜೇಶ ಧನವಾಡಕರ್, ವಿಜ್ಞಾನಿಗಳಾದ ಟಿ.ವಿ.ರಾಮಚಂದ್ರ, ಕೇಶವ ಕೊರ್ಸೆ, ಡಾ.ಪ್ರೀತಂ, ಶಿವಾನಂದ ಭಟ್ಟ, ಬಾಲಚಂದ್ರ ಸಾಯಿಮನೆ, ವಿ.ಎನ್.ನಾಯಕ ಮುಂತಾದವರು ಭಾಗವಹಿಸಿದ್ದರು. ವಸ್ತು ಪ್ರದರ್ಶನ, ಹಣ್ಣು, ತರಕಾರಿ ಪ್ರದರ್ಶನ, ವಿವಿಧ ಭತ್ತದ ತಳಿಗಳ ಬೀಜಗಳ ಪ್ರದರ್ಶನ ನಡೆಯಿತು.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading