ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಗೇರು ಮರದ ಕೊಂಬೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಹಿತ್ಲಳ್ಲಿಯಲ್ಲಿ ನಡೆದಿದೆ.

ಹಿತ್ಲಳ್ಲಿ ಸಮೀಪದ ಗೋಣಗಲಮಕ್ಕಿಯ ನಿವಾಸಿ, ಕೂಲಿ ಕೆಲಸದ, 37 ವರ್ಷದ ಮಂಜುನಾಥ ತಂದೆ ಮಾಣಿ ಕುಣಬಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು,

ಜೀವನದಲ್ಲಿ ಜಿಗುಪ್ಸೆಗೊಂಡ ಈತನು ಮಸರಕುಳಿ ಹಳ್ಳದ ದಡದಲ್ಲಿರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಗೊಣಗಲಮಕ್ಕಿಯ ನರಸಿಂಹ ಮಾಣಿ ಕುಣಬಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading