ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಆಮಿಷವೊಡ್ಡಿದ ಅಪರಿಚಿತರು, ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 23,95,261 ರೂ ಹಣವನ್ನು ವಂಚಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.

ಕಾರವಾರದ ನಂದಗದ್ದಾದ ಕುಲಸಂಬಿ ಕೋಂ ಮಹಮ್ಮದ್ ಷರೀಫ್ ಶೇಖ್ ಅವರು ಈ ಕುರಿತು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. ಇವರ ಮಗನಾದ ಜಹಾಂಗೀರನಿಗೆ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ ಮೂಲಕ ಒಂದು ಲಿಂಕ್ ಬಂದಿದ್ದು, ಈ ಲಿಂಕ್ ಕ್ಲಿಕ್ ಮಾಡಿದಾಗ ಕಂಪನಿಯೊಂದರ ಟ್ರೇಡಿಂಗ್ ಖಾತೆ ಓಪನ್ ಆಗಿದೆ. ಈ ಕಂಪನಿಯ ಏಜಂಟ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿದ್ದಳು.

ಹಣ ಹೂಡಿಕೆ ಮಾಡಿದ ನಂತರ ಈ ಕಂಪನಿಯವರು ಪ್ರಾರಂಭದಲ್ಲಿ ಲಾಭಾಂಶದ ಜೊತೆ ಹೂಡಿಕೆ ಹಣವನ್ನು ಮರಳಿ ನೀಡಿದ್ದರು. ನಂತರ ಕಂಪನಿಯನ್ನು ನಂಬಿದ ಜಹಾಂಗೀರ್ ಅವರು ಹೆಚ್ಚಿನ ಲಾಭದ ಆಸೆಯಿಂದ ಕಂಪನಿಯವರು ಹೇಳಿದಂತೆ ಹಂತ,ಹಂತವಾಗಿ ಒಟ್ಟೂ 23,95,261 ರೂ ಹಣವನ್ನು ಕಂನಿಯ ವಿವಿಧ ಖಾತೆಗಳಿಗೆ ಜಮಾ ಮಾಡಿದ್ದರು. ನಂತರ ಕಂಪನಿಯವರು ಈ ಹಣವನ್ನಾಗಲಿ, ಲಾಭಾಂಶವನ್ನಾಗಲೀ ನೀಡದೇ ವಂಚಿಸಿದ್ದಾರೆ ಎಂದು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading