ಸ್ವರ್ಣವಲ್ಲೀ ಕಿರಿಯ ಶ್ರೀಗಳ ವರ್ಧಂತಿ ಉತ್ಸವದ ನಿಮಿತ್ತ ಕಂಪ್ಲಿ ದೇವಾಲಯದಲ್ಲಿ ರಕ್ತದಾನ ಶಿಬಿರ ಸಂಪನ್ನ

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ವರ್ಧಂತಿ ಉತ್ಸವದ ನಿಮಿತ್ತ ಮಂಗಳವಾರ ಯಲ್ಲಾಪುರ ತಾಲೂಕಿನ ಕಂಪ್ಲಿಯ ಮಹಿಷಾಸುರಮರ್ಧಿನಿ ದೇವಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು.

ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ನಡೆಯಿತು. ಡಾ.ಪಿ.ಎಸ್.ಹೆಗಡೆ, ಡಾ. ವಿರೇಶ್ ಎಸ್.ಬಾಳೇಹೋಸುರು, ಡಾ.ವೀಣಾ ವೆರ್ಣೇಕರ್ ಭಾಗವಸಿದ್ದರು.

ಶಿಬಿರದಲ್ಲಿ 42 ಜನರು ರಕ್ತದಾನ ಮಾಡಿದರು. ರಾಮಚಂದ್ರ ಹೆಗಡೆ ಕಂಚನಹಳ್ಳಿ, ಸಂತೋಷ ಭಟ್ಟ, ಹೇಮಂತ ಹೆಗಡೆ ಹಾಗೂ ಗ್ರಾಮಸ್ಥರು ಇದ್ದರು.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading