ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಹಲವರು ತಮ್ಮ ಮೊಬೈಲ್, ಹಣ, ಪರ್ಸ್, ಆಧಾರ ಕಾರ್ಡ್, ಆಭರಣಗಳು ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದರು.

ಕಳೆದುಹೋಗಿದ್ದ ಈ ಎಲ್ಲವುಗಳನ್ನು ಜಾತ್ರಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಪೊಲೀಸರು ಹುಡುಕಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಜನಜಂಗುಳಿಯಲ್ಲಿ ಚಿಕ್ಕ ಮಕ್ಕಳು ಪಾಲಕರ ಕೈತಪ್ಪಿಸಿಕೊಂಡ ಘಟನೆಯೂ ನಡೆದಿದೆ. ಮಕ್ಕಳನ್ನು ಹುಡುಕಿ ಪಾಲಕರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಇದರಿಂದ ಆತಂಕದಲ್ಲಿದ್ದ ಪಾಲಕರು ನಿರಾಳರಾಗಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading