ಎ.24ರಂದು ರಾತ್ರಿ ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್‍ನಲ್ಲಿ ಪಟ್ಟಣದ ನೂರಾನಿಗಲ್ಲಿಯ ಜಮೀರ ಅಹ್ಮದ ತಂದೆ ನಜೀರಅಹ್ಮದ ದರ್ಗಾವಾಲೆ ಅವರ ಭೀಕರ ಹತ್ಯೆ ನಡೆದಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಶೇಷ ತಂಡ ರಚಿಸಿ, 24 ಗಂಟೆಯೊಳಗಾಗಿ ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲ ಆಯಾಮಗಳಿಂದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಶಿಗ್ಗಾಂವ ನಗರದ ಮಂಜುನಾಥ ತಂದೆ ನಾಗೇಂದ್ರ ಕಾಜಗಾರ, ಮುಂಡಗೋಡಿನ ಶ್ರೀಕಾಂತ ತಂದೆ ರಾಜಶೇಖರ ಕಿರಣ್ಣನವರ, ಧಾರವಾಡದ ಮಂಜುನಾಥ ತಂದೆ ವಿಷ್ಣು ಬೆಳಗಾಂವ, ಅಭಿಷೇಕ ತಂದೆ ಮಲ್ಲಿಕಾರ್ಜುನ ಬಡಶೆಟ್ಟಿ, ದೀಪಕ ತಂದೆ ನಾಗರಾಜ ನವಲೆ ಎಂಬುವವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ಬಂಧಿಸಿ, ಆರೋಪಿತರು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 6 ಸಜೀವ ಗುಂಡುಗಳನ್ನು ಆರೋಪಿತರಿಂದ ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಎಸ್ಪಿ ದೀಪನ್ ಎಂ.ಎನ್, ಎಸ್ಪಿ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗೀತಾ ಪಾಟೀಲ ಮಾರ್ಗದರ್ಶನದಲ್ಲಿ ಮುಂಡಗೋಡ ಪಿ.ಐ. ರಂಗನಾಥ ನೀಲಮ್ಮನವರ್, ಗೋಕರ್ಣ ಪಿ.ಐ. ಶ್ರೀಧರ ಎಸ್.ಆರ್, ಮುಂಡಗೋಡ ಪಿಎಸ್ಸೈ ಮಂಜುನಾಥ ಗೌಡರ, ಚಿತ್ತಾಕುಲ ಪಿಎಸ್ಸೈ ಪರಶುರಾಮ ಮಿರ್ಜಗಿ, ಯಲ್ಲಾಪುರ ಪಿಎಸ್ಸೈ ರಾಜಶೇಖರ ವಂದಲಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ಮುಂಡಗೋಡ ಠಾಣೆಯ ಸಿಬ್ಬಂದಿಗಳಾದ ತಿರುಪತಿ ಚೌಡಣ್ಣನವರ, ಲಂಬಾಣಿ ಬಸವರಾಜ, ಮಹಾಂತೇಶ ಮುಧೋಳ, ಮುತ್ತಣ್ಣ ಭೋವಿ, ನಾಗಪ್ಪ ಮೋರಟಗಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ, ಬಸವರಾಜ ಒಡೆಯರ್, ಯಲ್ಲಾಪುರ ಪೆÇೀಲಿಸ್ ಠಾಣೆಯ ಸಿಬ್ಬಂದಿಗಳಾದ ಮಹಮ್ಮದ ಶಫೀ ಶೇಖ,ಬಸವರಾಜ ಹಗರಿ, ಪ್ರವೀಣ ಪೂಜಾರ, ಗೋಕರ್ಣ ಠಾಣೆಯ ಸಿಬ್ಬಂದಿಗಳಾದ ಶ್ರೀಕಾಂತ ಕಟಬರ ಹಾಗೂ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿ ಉದಯ ಗುನಗಾ, ಬಬನ್ ಕದಂ ಪಾಲ್ಗೊಂಡಿದ್ದರು.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading